ವಿನಾಯಕನೆದುರು ?ಒನಕೆ ಓಬವ್ವ
Posted date: 14/May/2011

ಎಂ.ಆರ್.ಕೆ ಫ಼ಿಲಂಸ್ ಲಾಂಛನದಲ್ಲಿ ಡಿ.ಕೆ.ರಾಮಕೃಷ್ಣ(ಪ್ರವೀಣ್‌ಕುಮಾರ್) ನಿರ್ಮಿಸುತ್ತಿರುವ ‘ಒನಕೆ ಓಬವ್ವ ಚಿತ್ರ ಕಳೆದವಾರ ರಾಜಾಜಿನಗರದ ವಿನಾಯಕ ದೇಗುಲದಲ್ಲಿ ಆರಂಭವಾಯಿತು. ಇದು ಪ್ರವೀಣ್ ಅವರು ನಿರ್ಮಿಸುತ್ತಿರುವ ಹದಿನೆಂಟನೇ ಚಿತ್ರ.


    ‘ಶಿಷ್ಯ ಖ್ಯಾತಿಯ ದೀಪಕ್ ಈ ಚಿತ್ರದ ನಾಯಕ. ಆಯೇಷಾ ‘ಓಬವ್ವನ ಪಾತ್ರಧಾರಿ. ರವಿಶಂಕರ್, ರಾಜು ಭಯ್ಯಾ, ಸ್ವಸ್ತಿಕ್ ಶಂಕರ್, ಬುಲೆಟ್ ಪ್ರಕಾಶ್, ತಿಲಕ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದರು.


     ಈ ತಿಂಗಳ ಹತ್ತೊಂಭತ್ತರಿಂದ ಬೆಂಗಳೂರು ಹಾಗೂ ಚಿತ್ರದುರ್ಗದಲ್ಲಿ ಚಿತ್ರಕ್ಕೆ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಸಾಹಸ ಪ್ರಧಾನ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿರುವವರು ಆನಂದ್ ಪಿ ರಾಜು.


    ರಾಜೇಶ್‌ರಾಮನಾಥ್ ಸಂಗೀತವಿರುವ ಈ ಚಿತ್ರಕ್ಕೆ ಗೌರಿವೆಂಕಟೇಶ್ ಅವರ ಛಾಯಾಗ್ರಹಣವಿದೆ. ಥ್ರಿಲ್ಲರ್ ಮಂಜು, ರವಿವರ್ಮ ಹಾಗೂ ಕೌರವ ವೆಂಕಟೇಶ್ ಸಾಹಸ ನಿರ್ದೇಶನವಿರುವ  ‘ಒನಕೆ ಓಬವ್ವ ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ.



Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed